2022 ರಾಕಿ ಹಬ್ಬ ರಕ್ಷಾ ಬಂಧನ ಆಚರಣೆ ಶುಭ ಸಮಯ ಮಹತ್ವ

ಅಣ್ಣ ತಂಗಿ ಪ್ರೀತಿಯ ಸಂಕೇತವಾದ ರಕ್ಷಾಬಂಧನವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಣೆ ಮಾಡುತ್ತೇವೆ ಈ ಬಾರಿ ಈ ರಾಕಿ ಹಬ್ಬವು ಆಗಸ್ಟ್ 11ರ ಗುರುವಾರದಂದು ಆಚರಣೆ ಮಾಡಲಾಗುತ್ತಿದೆ ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಕೈಗೆ ರಾಗಿಯನ್ನು ಅಥವಾ ದಾರವನ್ನು ಕಟ್ಟುವ ಮೂಲಕ ಸಹೋದರನ ದೀರ್ಘಾಯುಷ್ಯವನ್ನು ಪ್ರಾರ್ಥನೆ ಮಾಡುತ್ತಾರೆ ಮತ್ತೊಂದೆಡೆ ಸಹೋದರರು ತಮ್ಮ ಕೈಗೆ ರಾಗಿಯನ್ನು ಕಟ್ಟಿಸಿಕೊಂಡ ನಂತರ ಸಹೋದರಿಗೆ ಆಶೀರ್ವಾದವನ್ನು ಮಾಡಿ ಅವರಿಗೆ ಉಡುಗೊರೆಗಳನ್ನು ಸಹ ನೀಡುವುದು ಮತ್ತೊಂದು ವಿಶೇಷ ಈ ಹಬ್ಬವು ಸಹೋದರ ಸಹೋದರಿಯರ ಅವಿನಾಭಾವ ಪ್ರೀತಿ ಮತ್ತು ಸಂಬಂಧದ ಸಂಕೇತವಾಗಿದ್ದು ಈ ಬಾರಿಯ ರಕ್ಷಾಬಂಧನವೂ ವಿಶೇಷ ಯೋಗದಿಂದ ಬಂದಿರುವ ಒಂದು ಮತ್ತೊಂದು ವಿಶೇಷ ಈ ದಿನದ ಮಹತ್ವವು ಹೆಚ್ಚಾಗಿರುವುದರಿಂದ ಈ ಯೋಗದಲ್ಲಿ ರಾಖಿ ಕಟ್ಟುವುದರಿಂದ ಸಂಬಂಧವು ಸದಾ ಕಾಲ ಚಿರವಾಗಿ ಉಳಿಯಲು ಸಹಾಯವಾಗುತ್ತದೆ ಮತ್ತು ಸಮೃದ್ಧಿಯು ಬರುತ್ತದೆ
 ರಕ್ಷಾ ಬಂಧನ ಆಚರಣೆ
 ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ ಮತ್ತು ಈ ದಿನದಂದು ಶ್ರಾವಣ ಮಾಸವು ಕೊನೆಗೊಳ್ಳುತ್ತದೆ
 ಶ್ರಾವಣ ಮಾಸದ ಹುಣ್ಣಿಮೆಯನ್ನು ಶ್ರಾವಣ ಪೂರ್ಣಿಮಾ ಎಂದು ಕೂಡ ಕರೆಯಲಾಗುತ್ತದೆ ಹಿಂದಿನ ಕಾಲದಲ್ಲಿ ರಾಖಿಯನ್ನು ರಕ್ಷಾ ಸೂತ್ರ ಎಂದು ಕರೆಯಲಾಗುತ್ತಿತ್ತು ಆದರೆ ಇದನ್ನು ಈ ಕಾಲದಲ್ಲಿ ರಾಖಿ ಎಂದು ಮರುನಾಮಕರಣ ಮಾಡಲಾಗಿದೆ ರಕ್ಷಣೆಯ ದಾರವನ್ನು ಕಟ್ಟುವ ಸಂಪ್ರದಾಯವನ್ನು ವೇದ ವೇದಗಳ ಕಾಲದಿಂದಲೂ ಮಾಡಿಕೊಂಡು ಬಂದಿರುವುದು ಮತ್ತೊಂದು ವಿಶೇಷ ಏಕೆಂದರೆ ಭದ್ರಕಾಲದಲ್ಲಿ ರಾಖಿ ಕಟ್ಟಬಾರದು ಎಂದು ಹೇಳಲಾಗುತ್ತದೆ ಈ ಬಾರಿಯ ರಾಖಿ ಹಬ್ಬದ ಶುಭ ಮಹೂರ್ತ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.
 ರಕ್ಷಾ ಬಂಧನದ ಶುಭ ಮುಹೂರ್ತ

 ಈ ಬಾರಿಯಾ ರಕ್ಷಾ ಬಂಧನವೂ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನಾಂಕವು 2022ರ ಆಗಸ್ಟ್ 11ರಂದು ಬೆಳಗ್ಗೆ 10:34ಕ್ಕೆ ಪ್ರಾರಂಭವಾಗುತ್ತದೆ ಇದು ಆಗಸ್ಟ್ 12ರ ಬೆಳಿಗ್ಗೆ 6:30 ವರೆಗೂ ಇರುತ್ತದೆ ಎಲ್ಲಾ ಹಬ್ಬಗಳನ್ನು ಉದಯ ತಿಥಿ ಎಂದು ಆಚರಿಸುವುದು ಮತ್ತೊಂದು ವಿಶೇಷ ಆದ್ದರಿಂದ ರಕ್ಷಾಬಂಧನದ ರಾಕಿ ಕಟ್ಟುವ ಶುಭ ಮುಹೂರ್ತವು ಆಗಸ್ಟ್ 11ರಂದು ಬೆಳಗ್ಗೆ 88 ಗಂಟೆಯಿಂದ ರಾತ್ರಿ 9:30ವರೆಗೂ ಇರುತ್ತದೆ ಈ ಬಾರಿಯ ರಕ್ಷಾ ಬಂಧನವೂ ರವಿ ಯೋಗದಲ್ಲಿ ಬಂದಿರುವುದರಿಂದ ಈ ರವಿ ಯೋಗವು ಬೆಳಗ್ಗೆ ಐದು ನಲವತ್ತರಿಂದ ಆರು ನಲವತ್ತರವರೆಗೆ ಪ್ರಾರಂಭವಾಗಲಿದೆ ಅಮೃತಕಾಲವೂ ಸಂಜೆ 6 ರಿಂದ ರಾತ್ರಿ 8ರವರೆಗೂ ಇರುತ್ತದೆ.
 ಹಾಗಿದ್ದರೆ ಶಾಸ್ತ್ರೋಕ್ತವಾಗಿ ರಾಖಿ ಕಟ್ಟುವುದು ಹೇಗೆ.

 ಸಹೋದರಿಯರು ಸಹೋದರನಿಗೆ ರಾಖಿ ಕಟ್ಟಲು ಪೂರ್ವದ ದಿಕ್ಕಿಗೆ ಮುಖ ಮಾಡಿ ಪಶ್ಚಿಮದ ದಿಕ್ಕಿಗೆ ಸಹೋದರಿಯ ಮುಖ ಮಾಡಿ ರಾಖಿಯನ್ನು ಕಟ್ಟಬೇಕು.
 ರಾಕಿಯನ್ನು ಕಟ್ಟುವ ವಿಧಾನ
 ಸಹೋದರನ ಕೈಗೆ ರಾಗಿಯನ್ನು ಕಟ್ಟುವಾಗ ಸಹೋದರನ ಬಲಗೈಯ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಿ ನಂತರ ಅವನಿಗೆ ತಿಲಕವನ್ನು ಮತ್ತು ಕುಂಕುಮವನ್ನು ಹಚ್ಚಬೇಕು ತಿಲಕವನ್ನು ಹಚ್ಚಿದ ನಂತರ ಸಹೋದರಿಯೂ ಸಹೋದರನ ತಲೆಯ ಮೇಲೆ ಅಕ್ಷತೆಯನ್ನು ಸಹೋದರರು ಸಹೋದರಿಯ ತಲೆಯ ಮೇಲೆ ಅಕ್ಷತೆಯನ್ನು ಹಾಕಿ ಇದಾದ ನಂತರ ದೀಪದಿಂದ ಆರತಿಯನ್ನು ಮಾಡಿ ಸಹೋದರಿ ಮತ್ತು ಸಹೋದರ ಪರಸ್ಪರ ಸಿಹಿ ತಿನಿಸುವ ಮೂಲಕ ತಮ್ಮ ಬಾಯಿಯನ್ನು ಸಿಹಿ ಮಾಡಿಕೊಳ್ಳಬೇಕು. ಸಹೋದರನು ಬಟ್ಟೆ ಮುಂತಾದ ವಿಶೇಷ ಉಡುಗೊರೆಗಳನ್ನು ಸಹೋದರಿಗೆ ನೀಡುವ ಮೂಲಕ ಸಂತೋಷದ ಜೀವನ ಸಿಗಲೆಂದು ಹಾರೈಸಬೇಕು.


 ಸಹೋದರನ ಹಣೆಗೆ ತಿಲಕವನ್ನು ಇಡುವಾಗ ತಪ್ಪದೇ ಈ ಮಂತ್ರವನ್ನು ಜಪಿಸಿ

 ಸಿಂಧೂರನ್ ಸೌಭಾಗ್ಯ ವರ್ಧನಂ ಪವಿತ್ರಂ ಪಾಪಂ ನಾಶನಂ ಆಪದಂ ಹರತೇ ನಿತ್ಯಂ ಲಕ್ಷ್ಮಿ ಸ್ತಿಷ್ಟತಿ ಸರ್ವದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Pls do not enter any spam link in the coment box